logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಐರಣಿ
(ನಾ)
ಮಣ್ಣಿನ ಪಂಚಕಲಶ, ಈ ಪದ ದಕ್ಷಿಣ ಕರ್ನಾಟಕದಲ್ಲಿ ಬಳಕೆಯಲ್ಲಿದೆ.

ಐರಾಣಿ
(ನಾ)
ಮದುವೆ ಸಂದರ್ಭದಲ್ಲಿ ಕುಂಬಾರನ ಮನೆಯಿಂದ ತರುವ ಬಣ್ಣ ಹಚ್ಚಿದ ಪವಿತ್ರ ಮಡಕೆಗಳು, ಐರಾಣಿಗಡಗೆಗಳಲ್ಲಿ ಒಂದು ಅಂಬ್ಲಿ ಗಡಿಗೆ, ಎರಡು ಕೊಡ, ಐದು ಮಗಿ, ಒಂದು ಬಿಂದಿಗೆ, ಐದು ಮುಚ್ಚಳ, ಎರಡು ದೀಪದ ಪಣತಿ ಇತ್ಯಾದಿಗಳು ಇರುತ್ತವೆ. ಐರಾಣಿಗೆ ಐರಣಿ, ಆಮ್ರಾಣಿ, ಅರಣಿ, ಐರಣಿ. ಆರಿವೇಣಿ, ಕೇಲು ಎಂಬ ಹೆಸರುಗಳಿಂದ ಕರೆಯುವರು. ಮದುವೆ ಹಿಂದಿನ ದಿನ ಮನೆಯವರು ಮುತ್ತೈದೆಯರನ್ನು ಕರೆದುಕೊಂಡು ಬಾಜಬಜಂತ್ರಿ ಸಮೇತ ಐರಾಣಿ ತರಲು ಕುಂಬಾರನ ಮನೆಗೆ ಬೆಳಗಿನ ಜಾವದಲ್ಲಿ ಹೋಗುವರು. ಕುಂಬಾರನ ಮನೆಯ ಅಂಗಳದಲ್ಲಿ ಕಂಬಳಿಹಾಸಿ, ಅದರ ಮೇಲೆ ಸುಣ್ಣ-ಬಣ್ಣ ಹಚ್ಚಿದ ಐರಾಣಿಗಳನ್ನು ಇಟ್ಟು ವಾದ್ಯವೃಂದದವರೊಂದಿಗೆ ಪೂಜೆ ಮಾಡುವರು. ನಂತರ ಮುತ್ತೈದೆಯರು ಐರಾಣಿ ಹೊತ್ತು ಮದುವೆ ಮನೆಗೆ ಹೋಗುವರು. ನಾಡಿನ ಎಲ್ಲ ಭಾಗಗಳಲ್ಲಿ ಈ ಪದ್ಧತಿ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಮದುವೆಯ ದಿನದಂದು ಐರಣಿಯನ್ನು ಚಿತ್ರದಲ್ಲಿ ಬಿಡಿಸಿ ಅದನ್ನು ಪೂಜಿಸುವರು. ಪಂಚ ಕಲಶಗಳನ್ನು ಪಂಚ ಮಠಾಧೀಶರ ಸಂಕೇತವೆಂದು ಭಾವಿಸುವರು. "ಐರಾಣಿ ತರಲ್ಹೊಂಟಾರ ಐದೆಯರು ಬಾಜಾ ಬಜಂತ್ರಿ ಮುಂದೆ ಮುಂದೆ| ಜಾಣ ಕುಂಬಾರಣ್ಣ ಐರಾಣಿ ಕೊಟ್ಟಿಹನು" (ಜಾನಪದ)
">

ಐರಣಿ ಊಟ
(ನಾ)
ಐರಾಣಿ ಗಡಿಗೆಗಳನ್ನು ಕುಂಬಾರನ ಮನೆಯಿಂದ ತಂದು ಪೂಜಿಸುವಾಗ ಕೊಡುವ ಊಟ. ಮಲೆನಾಡಿನಲ್ಲಿ ಈ ಸಂಪ್ರದಾಯವಿದೆ.


logo