logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಜಾಜಾ
(ನಾ)
ಕೆಂಪು ಬಣ್ಣದ ಮಣ್ಣು. ಕುಂಬಾರರು ಐರಾಣಿಗಡಿಗೆಗಳಿಗೆ ಜಾಜಾದಿಂದ ಬಣ್ಣ ಬಳಿಯುವರು.

ಜಾಪಣಿ
(ನಾ)
ಮುಚ್ಚಳ, ಇದು ಸ್ವಲ್ಪ ದೊಡ್ಡ ಗಾತ್ರದಲ್ಲಿರುವುದು, ಲಂಬಾಣಿ ಜನಾಂಗದಲ್ಲಿ ಈ ಪದ ಹೆಚ್ಚು ಬಳಕೆಯಲ್ಲಿದೆ.

ಜಿಗುಟು ಮಣ್ಣು
(ನಾ)
ಅಂಟಾದ ಮಿದು ಮಣ್ಣು ಮಡಕೆ ಮಾಡಲು ಯೋಗ್ಯವಾದ ಮಣ್ಣು.

ಜೆಲ್ಲಿ
(ನಾ)
ದೊಡ್ಡ ಬಿದುರಿನ ಬುಟ್ಟಿ-ಪುಟ್ಟಿ ಕುಂಬಾರರು ಮಡಿಕೆಗಳನ್ನು ಮಾರಟಕ್ಕೆ ಒಯ್ಯುವಾಗ ಇದರಲ್ಲಿ ಇಟ್ಟುಕೊಂಡು ಹೋಗುವರು.

ಜೇಡಿಮಣ್ಣು
(ನಾ)
ಮಡಕೆ ಮಾಡುವ ಕುಂಬಾರ ಮಣ್ಣು. ಜೇಡಿಮಣ್ಣಿನ ಸಾಮಾನ್ಯ ಬಣ್ಣಕ್ಕೆ ಕಬ್ಬಿಣಾಂಶವೇ ಕಾರಣ - ನೋಡಿ ಮಣ್ಣು ಜೇಡಿಮಣ್ಣು ಜಡಿದರೆ ಸಕ್ಕರೆ ಆಗುವುದೋ (ಗಾದೆ)

ಟೆರ್ರಾಕೊಟಾ
(ನಾ)
ಕುಂಭ ಕಲೆಯ ಒಂದು ಪ್ರಭೇದ (clay sculpture) ವಿವಿಧ ಬಗೆಯ ಅಲಂಕಾರಿಕ ವಸ್ತುಗಳನ್ನು ಗೊಂಬೆಗಳನ್ನು ಮತ್ತು ಆಟಿಗೆ ಸಾಮಾನುಗಳನ್ನು ಸುಡಾವೆ ಮಣ್ಣಿನಿಂದ ತಯಾರಿಸಲಾಗುವುದು. ಈ ಮಣ್ಣಿನಿಂದ ತಯಾರಿಸಿದ ವಸ್ತುಗಳು ಸಾಮಾನ್ಯ ಮಡಿಕೆಗಳಿಗಿಂತ ಹೆಚ್ಚಿನ ಉಷ್ಣತೆಯಲ್ಲಿ ಸುಡಲಾಗುವುದು. ಟೆರ್ರಾಕೊಟಾ ವಸ್ತುಗಳು ಸಾಮಾನ್ಯವಾಗಿ ನಸುಗೆಂಪು ಬಣ್ಣದವಾಗಿರುತ್ತವೆ. ಗೃಹಬಳಕೆ ವಸ್ತುಗಳಿಗಿಂತ ಅಲಂಕಾರಿಕ ವಸ್ತುಗಳನ್ನು ಹೆಚ್ಚಾಗಿ ಇದರಿಂದ ತಯಾರಿಸುವರು ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಟೆರ್ರಾಕೊಟ ಮಣ್ಣಿನ ವಸ್ತುಗಳು ಬಳಕೆಯಲ್ಲಿವೆ. ಮೌರ್ಯರ ಕಾಲದಲ್ಲಿ ಟೆರ್ರಾಕೊಟ ಶಿಲ್ಪ ಬಹಳ ಪ್ರಸಿದ್ಧಿ ಪಡೆದಿತ್ತು ಉತ್ತರ ಪ್ರದೇಶದಲ್ಲಿ ಟೆರ್ರಾಕೊಟ ಶಿಲ್ಪ ಹೆಚ್ಚಾಗಿ ಬೆಳೆದು ಬಂದಿದೆ ದಕ್ಷಿಣದಲ್ಲಿ ಶಾತವಾಹನರ ಕಾಲದಲ್ಲಿ ಈ ಕಲೆಗೆ ಹೆಚ್ಚು ಪ್ರೋತ್ಸಾಹ ದೊರೆತಿದೆ ಭಾರತದ ಮೂರ್ತಿಶಿಲ್ಪಕಲೆಯಲ್ಲಿ ಅಖನೂರಿನ ಟೆರ್ರಾಕೊಟ ಶಿಲ್ಪ ತನ್ನದೇ ಆದ ವೈಶಿಷ್ಟ್ಯ ಪಡೆದಿದೆ. ಬಂಗಾಳದ ಬಿರ್-ಬುಹಮ್ ಟೊರ್ರಾಕೊಟಾ ಶಿಲ್ಪ ಕೂಡ ಹೆಸರು ಪಡೆದಿತ್ತು. ಮಣ್ಣಿನ ಫಲಕಗಳಲ್ಲಿ ಅರಳಿದ ಟೊರ್ರಾಕೊಟ ಶಿಲ್ಪದಲ್ಲಿ ಕುಂಬಾರನ ಕಲಾ ಪ್ರತಿಭೆ - ಕೌಶಲ್ಯ ಎಲ್ಲವೂ ಅಪ್ರತಿಮವಾಗಿದೆ.

ತಂದೂರಿ ಒಲೆ
(ನಾ)
ಪರಾಟ ಬೇಯಿಸುವ ಒಲೆ, ವಾಡೆ ಆಕೃತಿಯಲ್ಲಿದ್ದು ಸುಮಾರು ಒಂದು ಮೀಟರ್ ಎತ್ತರವಿರುತ್ತದೆ. ಇಟ್ಟಿಗೆಯಿಂದಲೂ ಕೂಡ ಮಾಡುವರು ಹುಬ್ಬಳ್ಳಿ, ಶಿವಮೊಗ್ಗ ಜಿಲ್ಲೆಯ ಕುಂಬಾರರು ತಂದೂರಿ ಒಲೆ ಮಾಡುವರು. ತಂದೂರಿ ರೋಟಿ ಮಾಡಲು ಡಾಬಾಗಳಲ್ಲಿ ತಂದೂರಿ ಒಲೆ ಬಳಸುವರು.

ತಟ್ಟು
(ಕ್ರಿ)
ಬಡಿ, ಸೊಳದಿಂದ ಹಸಿಮಡಿಕೆಗಳನ್ನು ಬಡಿದು ರೂಪಗೊಳಿಸುವುದು

ತತ್ರಾಣಿ
(ನಾ)
ನೀರು ಕುಡಿಯಲು ಬಳಸುವ ಚಪ್ಪಟೆಯಾದ ಮಣ್ಣಿನ ಪಾತ್ರೆ. ಇದಕ್ಕೆ ಎರಡೂ ಕಡೆ ಹೊಟ್ಟೆ ಉಬ್ಬಿದ್ದು, ಕುತ್ತಿಗೆ ಸಣ್ಣದಾಗಿರುತ್ತದೆ ಬಯಲು ಸೀಮೆಯ ರೈತರು ಹೊಲಕ್ಕೆ ಹೋಗುವಾಗ ತತ್ರಾಣಿಯ ತುಂಬ ನೀರನ್ನು ತುಂಬಿಕೊಂಡು ಬಗಲಿಗೆ ಹಾಕಿಕೊಂಡು ಹೋಗುವರು. ತತ್ರಾಣಿಯನ್ನು ಮಧ್ಯದಲ್ಲಿ ಹಗ್ಗಕಟ್ಟಲು ಅನುಕೂಲವಾಗಲೆಂದು ಸುಮಾರು ಐದು ಸೆಂ. ಮೀ. ಅಗಲಕ್ಕೆ ಏಣು ಮಾಡಿ ಜಾಗ ಮಾಡಿರುತ್ತಾರೆ. ತತ್ರಾಣಿಯ ನೀರು ತಂಪಾಗಿರುವುದು. 'ಬನ್ನಿಗಿಡದಡಿಯಲಿ ತತ್ರಾಣಿ ತಣ್ಣೀರ ಕುಡಿದು ಬುತ್ತಿಯನುಂಡು ಸೊಂಪಾಗಿರೆ' (ಚೆನ್ನವೀರಕಣವಿ) ಹೊಲಕ ಹೊಂಟಾನ ಹೊಟ್ಟಿ ಡುಮ್ಮ (ಒಗಟು)

ತಲೆಬೋಳಮಗಿ
(ನಾ)
ಬಾಯಿಗೆ ಕಂಠವಿಲ್ಲದ ಬೋಳು ಗಡಿಗೆ, ಶವ ಸಂಸ್ಕಾರದ ಸಮಯದಲ್ಲಿ ಈ ಗಡಿಗೆಯ ತುಂಬ ನೀರು ತುಂಬಿ ಮೃತರ ಹಿರಿಯಮಗ ಇದನ್ನು ಹೆಗಲಲ್ಲಿ ಹೊತ್ತುಕೊಂಡು ಸಿದಗಿಯ ಗೋರಿಯ ಸುತ್ತಲೂ ಮೂರು ಸುತ್ತು ಹಾಕಿ ಹಿಂದಕ್ಕೆ ಚೆಲ್ಲುವನು ಈ ಪದ ಉತ್ತರ ಕರ್ನಾಟಕದಲ್ಲಿ ಬಳಕೆಯಲ್ಲಿದೆ.


logo